ಐದೂ ಬೆರಳು ತುಪ್ಪದಲ್ಲಿ, ತಲೆ ಕಡಾಯಿಯಲ್ಲಿ
ನನಗೆ ಮಂಗಳೂರಿಗೆ ಒಂದು ಅತ್ಯವಶ್ಯಕ ಕೇಳದ ಮೇಲೆ ಹೋಗ ಬೇಕಿತ್ತು. ಕೇವಲ ಒಂದು ದಿನದ ಕೆಲಸ. ಬಸ್ಸಿನಲ್ಲಿ ಹೊರಟು ಹಾಸನದ ಮೇಲೆ ಮಂಗಳೂರು ತಲುಪಿ ಕೆಲಸ ಮುಗಿಸಿ ಮರು ದಿನ ವಾಪಸ್ಸು ಬಂದರೂ ನನಗೆ ಸೋಮವಾರ ಬೆಂಗಳೂರಿನಲ್ಲಿ ಹೆಂಡತಿ ಮಕ್ಕಳ ಜೊತೆ ಇರ ಬಹುದಿತ್ತು. ನನ್ನ ಪ್ರಯಾಣಕ್ಕೆ ಯಾವುದೇ ತರದ ತೊಂದರೆ ಇರಲಿಲ್ಲ ಆದ್ದರಿಂದ ಅದರ ಬಗ್ಗೆ ಯೋಚನೆ ಮಾಡದೆ ಮಂಗಳೂರಿನ ಡಿಲಕ್ಸ್ ಬಸ್ಸಿಗೆ ಬುಕ್ದ್ ಮಾಡಿ ಹೊರಟೆ.
ಪ್ರಯಾಣ ಮಾಮೂಲಾಗಿತ್ತು. ಬಸ್ಸು ಎ.ಸಿ ಆದ್ದರಿಂದ ಹೊರಗಿನ ಬೇಸಗಿನ ಬಿಸಿ ತಗುಲಲಿಲ್ಲ. ಚೆನ್ನ ಪಟ್ಟಣದಲ್ಲಿ ಒಂದು ಕಚದ ಕಾಫಿ ಕುಡಿದರೂ ಹೆಚ್ಚು ಬೇಸರ ಆಗಲಿಲ್ಲ. ಆದರೆ ನನಗೇನು ಗೊತ್ತಿತ್ತು, ಈ ಪ್ರಯಾಣ ನನ್ನ ಜೀವನದ ಒಂದು ವಿಶೇಷ ಪ್ರಯಾಣ ಅಂತ. ಎಲ್ಲವೂ ಒಂದು ಫಿಲಂ ತರ ನಡೀತು. ನನಗೆ ಗೊತ್ತಿಲ್ಲದೇ ಎಲ್ಲೋ ಸೇರ ಬೇಕಾದವನು ಮತ್ತೆಲ್ಲೋ ಸೇರಿದೆ. ಬೇಗ ವಾಪಸು ಬಂದು ಹೆಂಡತಿಯ ಮಡಿಲು ಸೇರ ಬೇಕಾದವನು ಮತ್ಯಾವುದೋ ಹೆಣ್ಣಿನ ತೊಡೆ ಸಂದಿಯಲ್ಲಿ.
ಮಂಡ್ಯದಲ್ಲಿ ನಮ್ಮ ಬಸ್ಸನ್ನು ಕೃಷಿ ಸತ್ಯಾಗ್ರಹಿಗಳು ತಡೆದರು. ಬಸ್ಸು ನಿಂತಿದ್ದರಿಂದ ಎ.ಸಿ ಬಂದ್ ಆಗಿ ಬಿಸಿಲಿನ ಬಿಸಿಯ ಜೊತೆ ಬಸ್ಸಿನ ಝಳವೂ ಸೇರಿ ನಾನು ಹೆಣವಾದೆ. ಆ ಕಾಡಿನ ನಡುವೆ ತಿನ್ನುವುದಕ್ಕೂ ಏನೂ ಸಿಗಲಿಲ್ಲ. ನಾಲ್ಕು ಗಂಟೆ ಗಂಟೆಯ ನಂತರ ಬಸ್ಸನ್ನು ಬಿಟ್ಟರು ಆದ್ರೆ ಹಾಸನಕ್ಕೆ ಹೋಗಲು ಬಿಡಲಿಲ್ಲ. ಬಸ್ಸು ಮಡಿಕೇರಿಯ ಮುಖಾಂತರ ಮಂಗಳೂರಿಗೆ ಹೋಗ ಬೇಕಾಯ್ತು.
ಮಡಿಕೇರಿಯಲ್ಲಿ ನ ಮ್ಮನ್ನು ರಸ್ತೆಯಲ್ಲಿ ಬಿಟ್ಟು ದ್ರೈವೆರ್ ಮನೆ ದಾರಿ ಹಿಡಿದ. ಅವನ ಡ್ಯೂಟಿ ಮುಗಿದಿತ್ತು. ಹೊಸ ಡ್ರೈವರ್ ಬರಲಿಲ್ಲ. ಮಡಿಕೇರಿ ಡಿಪೋ ದಲ್ಲಿ ಏನಾಯ್ತೋ ಏನೋ. ಬಸ್ಸು ಅನಾಥವಾಯ್ತು. ಬೇರೆ ಬಸ್ಸಿನ ಏರ್ಪಾಟು ಮಾಡ ಬೇಕಾದ ವ್ಯಕ್ತಿ ಮಾಯವಾಗಿ ನಾವು ಫೂಟ್ ಪಾತ್ ಗಿರಾಕಿಗಳಾದೆವು.
..ಮುಂದುವರಿಯುವುದು
|