ಕಾಮೇಶಿ ಮೇಷ್ಟ್ರ ಕಾಮದಾಟ - ಎಲ್ಲವ್ವ ತಾಯಿ ನಿನಗೆ ಉಧೋ ಉಧೋ
ಗಂಗ ಎಲ್ಲವ್ವನಿಗೆ ಬಿಟ್ಟ ಹೆಣ್ಣು. ಪ್ರತಿ ವರ್ಶಾನೂ ಗಂಗ ಎಲ್ಲವ್ವನ ಜಾತ್ರೇಲಿ ಬೆತ್ತಲೆ ಓಡೋದಿಕ್ಕೆ ಬರ್ತಿದ್ಲು. ಈಗೀಗ ಸರ್ಕಾರ ಅದನ್ನ ಕಾಯ್ದೆ ಪ್ರಕಾರ ನಿಷೇಧಿಸಿದ್ದರೂ ಆ ಓಟ ಸರ್ಕಾರದ ಕಣ್ಣು ತಪ್ಪಿಸಿ ನಡೆಯುತ್ತಿತ್ತು. ಸರ್ಕಾರದ ಪೋಲೀಸರ ಕಣ್ಣು ತಪ್ಪಿಸಬಹುದು ಆದ್ರೆ ಈ ಹಾಳಾದ ಏನ್.ಜಿ.ಓ ಕಾರ್ಯ ಕರ್ತರುಗಳು ಅವರ ಜೊತೇಲೆ ಇದ್ದು ಬೆತ್ತಲೆ ಓಟ ತಪ್ಪಿಸೋಕೆ ಪ್ರಯತ್ನಿಸುತ್ತಿದ್ದರು.
"ದೇವರಿಗೆ ಹರಿಕೆ ಹೊತ್ತ ಮೇಲೆ ಅದನ್ನ ಮಾಡದೆ ಇದ್ದಾರೆ ದೇವರು ಕೋಪಿಸಿ ಕೊಳ್ಲೋಲ್ವ"
ಅಂತ ಎಲ್ಲ ದೇವ ದಾಸಿಗಳು ಹೇಗಾದರೂ ಮಾಡಿ ಹರಿಕೆ ಪೂರೈಸಲು ಪ್ರಯತ್ನಿಸುತ್ತಿದ್ದರು. ಈಗೀಗ ಬೇವಿನ ಎಲೆ ಕಟ್ಟಿಕೊಂಡು ಓಡಿ ಹರೆಕೆ ಪೂರೈಸುವುದೂ ಸರ್ಕಾರಕ್ಕೆ ಮಣ್ಣೆರಚುವುದು ಎರಡನ್ನೂ ಮಾಡುವ ದೇವ ದಾಸಿಗಳು ಹೆಚ್ಚಾಗಿದ್ದರು. ಆದರೆ ಗಂಗ ನಿಜವಾದ ಜೋಗಿತಿ. ಎಲ್ಲವ್ವನ ಜಾತ್ರೇಲಿ ಎಲ್ಲ ವರ್ಷ ತಾನು ಜೀವವಿರೋವರೆಗೆ ಬೆತ್ತಲೆ ಸೇವೆ ಮಾಡ್ತೀನೀಂತ ಹರಕೆ ಹೊತ್ತಿದ್ಲು ಆದ್ರಿಂದ ಜೀವ ಹೋದರು ಸರಿ ಅದನ್ನ ಇಷ್ಟು ವರ್ಷ ಪೂರೈಸಿದ್ಲು, ಇನ್ನೂ ಮಾಡ್ತೀನೀಂತ ದೈರ್ಯ ಹೊಂದಿದ್ಲು.
'ಇವರು ದೇವರ ಜೊತೆ ಆಟ ಆಡ್ತಾರೆ. ಎಲ್ಲವ್ವ ತಾಯಿ ಚಿಕ್ಕ ಪುಟ್ಟ ದೇವರಲ್ಲ. ಅವಳು ಜಗನ್ಮಾತೆ. ಬರೆ ಕರ್ನಾಟಕದಲ್ಲಿ ಮಾತ್ರ ಅಲ್ಲ ಅಂದ್ರ, ತಮಿಳ್ ನಾಡು, ಮಹಾರಾಷ್ಟ್ರದಲ್ಲೂ ಜನ ಅವಳನ ಪೂಜಿಸ್ತಾರೆ. ಅವಳು ಕಾಳಿಯ ಅವತಾರ. ಅವಳ ಜೊತೆ ಆಟವಾಡಿದರೆ ನರಕ ಕಟ್ಟಿಟ್ಟ ಬುತ್ತಿ'
ಅಂತ ಕಳೆದ ಸಲ ಸ್ವಾಮಿ ಊರಿಗೆ ಬಂದಾಗ ಹೇಳಿದ್ದು ಅವಳಿಗೆ ಈಗಲೂ ನೆನಪಿತ್ತು. 'ಎಲ್ಲಮ್ಮ ನಮ್ಮ ಅಹಂಕಾರ ಸುಟ್ಟು ಭಸ್ಮ ಮಾಡಿ ನಮ್ಮನ್ನು ಸಹಾನುಭೂತಿಯಿಂದ ಪಾಲಿಸುವವಳು. ಅವಳ ಹರಿಕೆ ಯಾವುದೇ ಕಾರಣಕ್ಕೂ ನಿಲ್ಲಬಾರದು'
ಎನ್ನುವುದು ಎಲ್ಲ ದೇವದಾಸಿಗಳ ಅಂಬೋಣ, ಜೊತೆಗೆ ಗಂಗಳದ್ದೂ ಕೂಡ.
ಜಾತ್ರೆಗೆ ಒಂದು ವಾರ ಇರೋವಾಗ್ಲೇ ಗಂಗ ಸೌಂದತ್ತಿಯಲ್ಲಿ ಬೀಡು ಬಿಟ್ಟಿದ್ಲು. ಪ್ರತಿ ರಾತ್ರಿ ಹೊರಬಂದು ಜನರ ಬೀಡು ಇಲ್ಲದಿರುವ ಸಮಯ ನೋಡಿ, ಬೆತ್ತಲೆ ಸೇವೆ ಪೂರೈಸಿ ನೆಮ್ಮದಿಯಾಗಿ ಜಾತ್ರೆ ಮುಗಿಸಿ ಊರಿಗೆ ಹೋಗುವುದು ಅವಳ ಯೋಚನೆ. ಅವಳ ಜೊತೆ ಇನ್ನೂ ಕೆಲವು ಜೋಗಿತಿಯರೂ ಸೇರಿಕೊಂಡಿದ್ರು. ಮೊದಲೆರಡು ದಿನ ಬೆತ್ತಲೆ ಓಟ ಸಾಧ್ಯವಾಗಲಿಲ್ಲ. ಆದರೆ ಮೂರನೇ ದಿನ ಅವಕಾಶ ಸಿಕ್ಕಿ ಒಂದೇ ಓಟಕ್ಕೆ ಉಧೋ ಉಧೋ ಎನ್ನುತ್ತಾ ಪೊಲೀಸರು, ಏನ್.ಜಿ.ಓ ಕಾರ್ಯಕರ್ತರು ತಡೆಯುವುದಕ್ಕಿಂತ ಮೊದಲೇ ಓಡಿ ಹರಿಕೆ ಪೂರೈಸಿ ಕತ್ತಲಲ್ಲಿ ಮಾಯವಾದರು. ಪೋಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳಬಹುದು ಎನ್ನೋ ಯೋಚನೆಗಿಂತ ಹರಿಕೆ ಪೂರೈಸಿದ ನೆಮ್ಮದಿ ಅವರ ಮುಖದಲ್ಲಿ ಎದ್ದು ಕಾಣುತಿತ್ತು.
ಜಾತ್ರೆಗೆ ಊರಿನ ಎಲ್ಲ ಜನರೂ ಬಂದಿದ್ದರು. ಹೆಚ್ಚಿನವರು ಜಾತ್ರೆಗಾಗಿ ಬಂದಿದ್ದರೆ ಕೆಲವು ಜನ ಬೆತ್ತಲೆ ಓಡುವ ಜೋಗಿತಿಯರನ್ನ ನೋಡೋಕಾಗಿಯೇ ಬಂದ ಹಾಗಿತ್ತು. ಕೆಲವರು ಅದನ್ನ ನೇರವಾಗಿ ಒಪ್ಪಿಕೊಂಡು ರಾತ್ರಿ ಜಾಗರಣೆ ಮಾಡುತ್ತಾ ಬೆತ್ತಲೆ ಓಟದ ಮಜಾ ಅನುಭವಿಸಲು ಪ್ರಯತ್ನಿಸುತ್ತಿದ್ದರೆ, ಇನ್ನು ಕೆಲವು ನಿಜವಾದ 'ಭಾರತೀಯರಂತೆ' ಡಬಲ್ ಆಕ್ಟಿಂಗ್ ಮಾಡ್ತಿದ್ರು.
"ಬೆತ್ತಲೆ ಓಟ ತುಂಬಾ ಕೆಟ್ಟದ್ದು. ಇದು ನಮ್ಮ ಸಂಸ್ಕೃತಿಗೆ ಕಳಂಕ. ಇದನ್ನ ಸರ್ಕಾರ ಎಲ್ಲಾ ಕಾರಣಕ್ಕೂ ನಿಲ್ಲಿಸಬೇಕು"
ಎಂದು ಬೆಳಗಿನ ಹೊತ್ತು ಭಾಷಣ ಬಿಗಿದು ರಾತ್ರಿ ಯಾರೂ ಕಾಣದಂತೆ ಬೆತ್ತಲೆ ಓಟದ ಮಜಾ ಅನುಭವಿಸುವುದಕ್ಕೆ ಕಂಬಳಿ ಹೊದ್ದುಕೊಂಡು ಮರದ ಹಿಂದೆಯೋ, ಮನೆಗಳ ಮೇಲೋ ಕಣ್ಣಿಗೆ ಎಣ್ಣೆ ಹಾಕಿಕೊಂಡು ಕಾಯುತ್ತಿದ್ದರು.
ಜಾತ್ರೆಗೆ ಮೇಷ್ಟ್ರೂ ಬಂದಿದ್ರು. ಅವರ ಜೊತೆ ಊರ ಪೂರ್ತಿ ಪಟಾಲಂ ಇತ್ತು. ಊರವರು ಬೆತ್ತಲೆ ಸೇವೆಯ ಬಗ್ಗೆ ಯಾವುದೇ ಅಭಿಪ್ರಾಯ ಹೊಂದಿರ್ಲಿಲ್ಲ. ಅದರ ಬಗ್ಗೆ ಒಳ್ಳೆಯದು ಯಾ ಕೆಟ್ಟದೂ ಎರಡೂ ಇರ್ಲಿಲ್ಲ. ಮೇಷ್ಟ್ರಿಗೆ ಇದು ಪೂರ್ಣ ಹೊಸದು. ತನ್ನ ಊರ ಜಾತ್ರೇಲಿ ಬೆಂಡಕ್ಕಿ, ಬತಾಸು ತಿನ್ನುತ್ತಾ ಜಾತ್ರೆ ಪೂರ ಸುತ್ತಾಡಿ ಕೋಳಿ ಜಗಳ, ಎರಡು ತಲೆ ಹಾವು, ಖಡ್ಗ ನುಂಗೋದನ್ನ ನೋಡ್ತಾ, ಮ್ಯಾಜಿಕ್ ಶೋ ನಲ್ಲಿ ಬೆರಗಾಗುತ್ತ, ತೂಗು ತೊಟ್ಟಿಲಲ್ಲಿ ತೂಗಿ ಜಾತ್ರೆಯಾ ಮಜಾ ಉಡಾಯಿಸುವುದು ಬಿಟ್ಟು, ಹರಿಕೆ ಪೊಲೀಸರು ಅಂತ ಜನ ತಲೆ ಕೆಡಿಸಿಕೊಳ್ಳೋದು ಅವರಿಗೆ ಯಾಕೋ ಅರ್ಥವಾಗ್ಲಿಲ್ಲ.
.... ಮುಂದುವರಿಯುವುದು
|