ಮಲ್ಲು ಅಂಕಲ್ - ಪ್ರಾಬ್ಲಂ ನ ಪರಿಹಾರ
ಹೋಟೆಲ್ ಗೆ ಒಂದು ದಿನದ ರಜೆ ಮಾತ್ರ ಹಾಕಿದ್ದೆ. ಬಂದ ದಿನವೇ ಕೆಲಸ ಸಿಗುತ್ತೆ ಎಂಬ ನಂಬಿಕೆಯೇ ಇರಲಿಲ್ಲ. ಈಗ ಕೆಲಸ ಸಿಕ್ಕಿದ್ದು ಮಾತ್ರ ಅಲ್ಲ. ಕೆಲಸದ ಜೊತೆ ಒಂದು ದೊಡ್ಡ ಸಮಸ್ಯೆಯೂ ಇತ್ತು. ಅದೆಂದರೆ ನಾನು ಅಪ್ರೆಂಟಿಸ್ ಒಪ್ಕೊಂಡಿರೋದ್ರಿಂದ ನನಗೆ ಬರುವ ಸ್ಟೈಫಂಡ್ ನನ್ನ ಜೀವನಕ್ಕೆ ಸಾಲುವುದಿಲ್ಲ. ಒಂದು ವರ್ಷದವರೆಗಾದರೂ ಬೇರೊಂದು ಕೆಲಸದಲ್ಲಿರಲೇ ಬೇಕಾಗಿತ್ತು. ಬೆಳಿಗ್ಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಸಂಜೆ ಹೋಟೆಲ್ ನಲ್ಲಿ ಕೆಲಸ ಮಾಡುವುದು ಅಷ್ಟು
ಸುಲಭ ಅಲ್ಲ ಆದರೆ ನಾನು ನನ್ನ ಭವಿಷ್ಯಕ್ಕೊಸ್ಕರ ಮಾಡಲೇ ಬೇಕಿತ್ತು. ಇದೆ ವಿಷಯದಲ್ಲಿ ಯೋಚನೆ ಮಾಡುತ್ತಾ ಕುಳ್ತಿರಬೇಕಾದ್ರೆ
"ಯಾಕೋ, ಏನಾಯ್ತೋ, ಯಾರಾದ್ರೂ ಸತ್ರೇನೋ?" ಕೇಳಿದಳು ಪದ್ಮಾವತಿ
ಕೇವಲ ಒಂದೇ ದಿನದ ಪರಿಚಯದಿಂದ ಬಹಳ ಹತ್ತಿರದವಳಾಗಿ ಏಕವಚನಕ್ಕೆ ಇಳಿದು ಉಭಯ ಕುಶಲೋಪರಿಯನ್ನ ಈತರ ಈ ಬೆಂಗಳೂರಿನವರು ಮಾತ್ರ ಮಾಡೋಕೆ ಸಾಧ್ಯ ಅಂತ ಕಾಣುತ್ತೆ. ನಾವು ವರ್ಷಗಳ ಸಂಬಂದ ಇದ್ದರೂ ಇನ್ನೂ ಬಹು ವಚನದಿಂದ ಏಕ ವಚನಕ್ಕೆ ಇಳಿಯೋಕೆ ಹಿಂದೆ ಮುಂದೆ ನೋಡ್ತೀವಿ.
"ಇಲ್ಲ. ಯಾರೂ ಸತ್ತಿಲ್ಲ. ಇದೆ ತರ ನೀ ಮಾತಾಡಿದ್ರೆ ಕೇಯ್ದು ಕೇಯ್ದು ನಿನ್ನ ಸಾಯಿಸ್ತೀನಿ" ನಾನೆಂದೆ
"ಸುಮ್ಮನೆ ಸಾಯೋಕಿಂತ ಕೇಯಿಸಿಕೊಂಡು ಸಾಯೋದು ಬಾಳ ಒಳ್ಳೇದು. ಅದರಲ್ಲೂ ನಿನ್ನಿಂದ ಕೇಯಿಸಿಕೊಳ್ಲೋಕೊಸ್ಕರ ನಾನು ಸಾಯೋಕೂ ರೆಡಿ. ಆದ್ರೆ ನಿಂತಲೇಲಿ ಯಾವ ಭೂತ ಕುಣೀತಿದೆ ಅಂತಾನಾದ್ರೂ ಹೇಳು"
"ನಂತಲೇಲಿ ಯಾವ ಭೂತಾನೂ ಕುಣೀತಿಲ್ಲ. ಅಪ್ರೆಂಟಿಸ್ ಮಾಡೋ ಒಂದು ವರ್ಷದಲ್ಲಿ ಹೊಟ್ಟೆ ಬಟ್ಟೆಗೆ ಏನು ಮಾಡೋದು ಅಂತ ಯೋಚನೆ ಮಾಡ್ತಾ ಇದ್ದೀನಿ"
"ಅಪ್ರೆಂಟಿಸ್ ಮಾಡಿದ್ರೆ ಬಿಟ್ಟಿಗೆ ಮಾಡ್ತೀಯ? ದುಡ್ಡು ಬರೋಲ್ವಾ?"
"ಬರುತ್ತೆ, ಅದ್ರಿಂದ ಒಂದು ಹೊತ್ತಿನ್ ಊಟಕ್ಕೂ ಸಾಕಾಗೋಲ್ಲ"
"ಬೆಳಿಗ್ಗೆ ಮಧ್ಯಾಹ್ನ ಕ್ಯಾಂಟೀನ್ ನಲ್ಲಿ ತಿಂದ್ರೆ ರಾತ್ರಿ ಊಟಕ್ಕೆ ಮಾತ್ರ ಯೋಚನೆ ಮಾಡ್ಬೇಕು. ಆ ಒಂದು ಹೊತ್ತಿಗೆ ನಿಂಗೆ ಬರೋ ಸ್ಟೈಪಂಡ್ ಸಾಕು"
"ಇರೋಕೆ ಜಾಗ ಬೇಕಲ್ವ. ರಸ್ತೆ ಪಕ್ದಲ್ಲಿ ಇರ್ಲಾ?"
"ಈ ಮನೆ ನಿಂಗೆ ರಸ್ತೆ ಪಕ್ಕ ಅಂತ ಅನ್ನಿಸುತ್ತಾ?"
"ಈ ಮನೆ ನಿಂದು. ನಾನ್ಯಾಗೆ ಇರ್ಲಿ?"
"ನಾನೇ ನಿಂಗೆ ಇಲ್ಲಿರು ಅಂತ ಹೇಳಿದ್ರೆ?"
"ಹ್ಯಾಗಿರೋಕಾಗುತ್ತೆ? ಜನ ಏನಂತಾರೆ?"
"ಜನ ಏನನ್ತಾರೆಂತ ಯೊಂಚ್ನೆ ಮಾಡ್ಬೇಡ. ನಾನು ಊಟಕ್ಕಿಲ್ದೆ ಇಲ್ಲಿ ಬಂದಾಗ ಜನ ಏನು ನನಗೆ ಊಟ ಹಾಕಿಲ್ಲ. ಅದರಲ್ಲೂ ಇಲ್ಲಿ ಜನರೆ ಇಲ್ಲ, ಅವ್ರ ಬಗ್ಗೆ ಯೋಚನೆ ಮಾಡೋಕೆ."
"ನಿನ್ ಋಣದಲ್ಲಿ ನಾನ್ಯಾಕೆ ಇರ್ಲಿ?"
"ಋಣ ಹರಿಸೋಕೆ ನಾನು ದಾರಿ ತೋರ್ಸಿದ್ರೆ?"
"ಏನಂತಾ ದಾರಿ?"
"ತುಂಬಾ ಸುಲಬದ್ದು. ಆದ್ರೆ ಆಗೋಲ್ಲ ಅನ್ಬಾರ್ದು"
"ವಿಷ್ಯ ಗೊತ್ತಿಲ್ದೆ ಆಗುತ್ತೆ ಆಗಲ್ಲ ಅನ್ನೋಕಾಗಲ್ಲ"
"ನೀನು ಈಗಾಗ್ಲೇ ಮಾಡಿದ್ದೆ. ಹೊಸದೇನೂ ಇಲ್ಲ"
"ಏನದು?"
"ದಿನಕ್ಕೆರಡು ಸಾರಿ ನೀನು ಮೇಲೆ, ನಾನು ಕೆಳಗೆ"
"ಅದು ಋಣ ಅಲ್ಲ, ಅದರಿಂದ ನಂಗೂ ಸಂತೋಷ ಅಲ್ವ?"
"ಸಂತೋಷ ನಿಂಗಿದ್ಯೋ ಇಲ್ವೋ ಗೊತ್ತಿಲ್ಲ. ನಂಗಂತೂ ಇದೆ. ಅದೇ ನಂಗೆ ಬೇಕಾಗಿರೋದು"
"ಸರಿ. ಆದ್ರೆ ಸದ್ಯಕ್ಕೆ ನಂಗೆ ಮದ್ವೆ ಆಗೋಕೆ ಆಗಲ್ಲ."
"ಮದ್ವೆಯಾಗೋಕೆ ನಿನಗ್ಯಾರು ಹೇಳಿದ್ರು. ನಂಗೂ ಮದ್ವೆ ಇಷ್ಟ ಇಲ್ಲ. ನಂಗೆ ಸ್ವಾತಂತ್ರ ಮುಖ್ಯ"
ಹೀಗೆ ನನ್ನ ಮೊದಲ ದೊಡ್ಡ ಪ್ರಾಬ್ಲಂ ಸಾಲ್ವ್ ಆಯ್ತು
.... ಮುಂದುವರಿಯುವುದು
|